ಮುಂಜಾನೆ ಅರುಣೋದಯಕ್ಕೆ ಮುಂಚೆ ಸಾವಿರಾರು ಇಬ್ಬನಿಗಳು ಹುಲ್ಲ ಮೇಲೆ, ಹೂವಿನ ಮೇಲೆ, ಗಿಡದ ಎಲೆಯ ಮೇಲೆ, ಬಳ್ಳಿಯ ಮೇಲೆ ತೂಗಿ ಬಾಗಿ ಆಟವಾಡುತ್ತಾ ಸಂತಸವಾಗಿದ್ದವು. ನಮ್ಮ ಬಾಳದೆಷ್ಟು ಸುಂದರ, ನಾವು ವಜ್ರದಂತೆ ಹೊಳೆಯಬಲ್ಲೆವು. ನಮ್ಮ ಸರಿಸಮಾನ ಯಾರೂ ಇಲ್ಲ” ಎಂದು ಕೊಂಡವು. ಈ ಮನೋಹರ ಮುಂಜಾವಿನಲ್ಲಿ ನಮ್ಮದು “ಪೂರ್ಣತೆಯ ಬಾಳು” ಎಂದು ಹೆಮ್ಮೆ ಪಟ್ಟುಕೊಂಡವು. ಮಧ್ಯಾಹ್ನವಾಗಲು ಸೂರ್ಯನ ಪ್ರಖರ ಕಿರಣದಲ್ಲಿ ಎಲ್ಲಾ ಇಬ್ಬನಿಗಳೂ ಮಾಯವಾದವು. ಮರದ ನೆರಳಲ್ಲಿ ಅಡಗಿದ್ದ ಒಂದೇ ಒಂದು ಇಬ್ಬನಿ, ತನ್ನ ಪರಿವಾರದವರು ಎಲ್ಲಿ ಹೋದರು ಎಂದು ಯೋಚಿಸಿತು. ಸಂಜೆ ಬರುವವರಿಗಾದರು ನನ್ನ ಒಂಟಿ ಪಯಣ ಸಾಗಬಹುದೇ? ಎಂದು ಯೋಚಿಸಿತು. ಬೆಳಕು ಹರಿದರೆ ಮತ್ತೆ ತನ್ನ ಪರಿವಾರದೊಂದಿಗೆ ಮಿಲನವಾಗಬಹುದೆಂಬ ಕ್ಷಣದ ಕನಸು ಬತ್ತಿ ಹೋಯಿತು.
*****
Related Post
ಸಣ್ಣ ಕತೆ
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ದಾರಿ ಯಾವುದಯ್ಯಾ?
ಮೂವತೈದು ವರ್ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…